ಬೆಳಗಾವಿ, ಮೇ 23 : ಗೀತಾ.ಎಸ.ಗುಜನಾಳ ಮದನಭಾವಿ ಗ್ರಾಮದ ಇವರು 2023-2024 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆ ಬೈವಹೊಂಗಲ ತಾಲೂಕಿನಲ್ಲಿ ಶಿಕ್ಷಣ ಪೌಂಡೇಶನ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಿ ಗ್ರಂಥಪಾಲಕರ ಪ್ರೀತಿಗೆ ಪಾತ್ರರಾಗಿ, ಇವರು ಗ್ರಂಥಾಲಯ ಮತ್ತು ಗ್ರಂಥಪಾಲಕರ ಸವಿನೆನಪಿನ ಕಾಣಿಕೆಯಾಗಿ ಗ್ರಂಥಾಲಯ ಪಿತಾಮಹರಾದ ಡಾ||ಎಸ.ಆರ.ರಂಗನಾಥನ ಅವರ ಮೂರ್ತಿಗಳನ್ನು ಭಾಂವಿಹಾಳ, ಬೆಳವಡಿ, ದೊಡವಾಡ, ಉಡಿಕೇರಿ, ಗೋವನಕೊಪ್ಪ, ಸಂಪಗಾಂವ, ಚಿಕ್ಕಬಾಗೇವಾಡಿ, ಮುರಕೀಭಾಂವಿ, ಆನಿಗೋಳ, ವಕ್ಕುಂದ , ಗ್ರಂಥಾಲಯಗಳಿಗೆ ಮೂರ್ತಿಗಳನ್ನು ವಿತರಿಸಲಾಯಿತು.

ಬೈಲಹೊಂಗಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸಂಜಯ ಜುನ್ನೂರ ಅವರ ಸಹಮತದೊಂದಿಗೆ ವ್ಯವಸ್ಥಾಪಕರು ಜಿ.ಎಸ.ಬಡೆಮ್ಮಿ, ಜನಾಧಿಕಾರಿ.ಆರ್.ಎಸ್.ಕಡೇಮನಿ, ದ್ವೀತೀಯ ದರ್ಜೇ ಲೆಕ್ಕ ಸಹಾಯಕಿ ಕವಿತಾ ಇವರೆಲ್ಲರ ಮೂಲಕ ಮೂರ್ತಿಗಳನ್ನು ವಿತರಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಲಾಯಿತು. ಗ್ರಂಥಪಾಲಕರಾದ ಸಿ.ಎಸ.ಕಳಸನ್ನವರ ಇವರಿಂದ ಸ್ವಾಗತ ಭಾಷಣ, ಗಂಗಾಂಬಿಕಾ ಕಡಬಿ ಮತ್ತು ಗೀತಾ ಉಪ್ಪಾರ ಇವರಿಂದ ಪ್ರಾರ್ಥನಾ ಗೀತೆ, ಎಮ.ಎಸ.ಕೆಂಜೇಡಿಮಠ ಇವರಿಂದ ವಂದನಾರ್ಪಣೆ ಜರುಗಿತು. ಗ್ರಂಥಪಾಲಕರೆಲ್ಲರೂ ಗೀತಾ.ಎಸ.ಗುಜನಾಳ ಇವರಿಗೆ ಸನ್ಮಾನ ಮಾಡುವ ಮೂಲಕ ಧನ್ಯವಾದ ತಿಳಿಸಿದರು.


