ಬೆಳ್ತಂಗಡಿಯಲ್ಲಿ ವಿಘ್ನ ಸಂತೋಷಿಗಳು ಹೆಚ್ಚಾಗಿದ್ದಾರೆ – ಪರೋಕ್ಷವಾಗಿ ಕೈ ನಾಯಕನಿಗೆ ಬಿನುತಾ ಬಂಗೇರ ಟಾಂಗ್ !

ಬೆಳ್ತಂಗಡಿ, ಜ. 16 : ನಮ್ಮ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಅನ್ಯ ಕಾರ್ಯ ನಿಮಿತ್ತವಾಗಿ ಉಪಸ್ಥಿತರಿಲ್ಲ. ಈ ಒಂದು ಕಾರಣದಿಂದ ಬೆಳ್ತಂಗಡಿಯಲ್ಲಿರುವ ಫೇಕ್ ಐಡಿಗಳಿಗೆ ಬಹಳಷ್ಟು ಕೆಲಸ ಸಿಗಲಿದೆ. ರಾತ್ರಿಯಿಡೀ ಅವರು ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ಕೆಲಸ ಮಾಡಲಿದ್ದಾರೆ ಎಂದು ಬಂಗೇರ ಬ್ರಿಗೇಡ್ ಬೆಳ್ತಂಗಡಿ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರ ಅವರು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರೋರ್ವರಿಗೆ ಟಾಂಗ್ ನೀಡಿದ್ದಾರೆ.

Advertisement

ಕೀರ್ತಿಶೇಷ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಫೇಕ್ ಐಡಿ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಕುಂಬು ಮಂಡೆ(ಹಾಳಾಗಿರುವ ತಲೆ)ಗಳಿಗೆ ಹೇಳಲು ಬಯಸುತ್ತೇನೆ, ಖಾದರ್ ಅವರು ಊರಿನಲ್ಲಿರುತ್ತಿದ್ದರೆ ಖಂಡಿತಾ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈ ಕಬಡ್ಡಿ ಪಂದ್ಯಾಟಕ್ಕೆ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳು, ಖಾದರ್ ಸರ್, ರಮನಾಥ್ ರೈ ಸರ್ ಇವರನ್ನು ಸೇರಿಸಿಕೊಂಡೇ ಆಯೋಜನೆ ಮುಂದೆಯೂ ಮಾಡುತ್ತೇನೆ ಎಂದರು.

ಕಾರ್ಯಕ್ರಮವನ್ನು ಹೇಗಾದರೂ ಹಾಳು ಮಾಡಬೇಕೆಂದು ವಿಘ್ನ ಸಂತೋಷಿಗಳು ಕಾಯುತ್ತಿದ್ದಾರೆ. ಕಳೆದ ವರ್ಷವೂ ಅವರು ಸುಮಾರು ಆರು ಡಮ್ಮಿ ತಂಡಗಳನ್ನು ಹೆಸರು ನೋಂದಾಯಿಸುವ ಮೂಲಕ ಕಾರ್ಯಕ್ರಮವನ್ನು ಕೆಡವಲು ಪ್ರಯತ್ನಿಸಿದ್ದರು. ಆದರೆ, ಅದು ಸಫಲವಾಗಿಲ್ಲ. ಈಗ ಬೆಳ್ತಂಗಡಿಯಲ್ಲಿ ವಿಘ್ನ ಸಂತೋಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಇರಲಿಲ್ಲ, ಆದರೆ ಈಗ ವಿಘ್ನ ಸಂತೋಷಿಗಳೇ ಹೆಚ್ಚಾಗಿದ್ದಾರೆಂದು ಕಿಡಿಕಾರಿದರು.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಅರಣ್ಯದಂಚಿನ ಜನರಿಗೆ ಮೂಲಭೂತ ಸೌಕರ್ಯಕ್ಕೆ ಶಾಸಕ ಹರೀಶ್ ಪೂಂಜಾ ಮನವಿ

ಕರಾವಳಿ, ಟಾಪ್ ಸುದ್ದಿಗಳು

ಉಡುಪಿ : ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವದಂತಿಗೆ ನಿಜವೇ ? – ಪ್ರಮೋದ್ ಮಧ್ವರಾಜ್ ಸ್ಪಷ್ಟನೆಯೇನು ನೋಡಿ

⚠️ Contents are protected on this website.