ಬೆಳ್ತಂಗಡಿಯಲ್ಲಿ ವಿಘ್ನ ಸಂತೋಷಿಗಳು ಹೆಚ್ಚಾಗಿದ್ದಾರೆ – ಪರೋಕ್ಷವಾಗಿ ಕೈ ನಾಯಕನಿಗೆ ಬಿನುತಾ ಬಂಗೇರ ಟಾಂಗ್ !

ಬೆಳ್ತಂಗಡಿ, ಜ. 16 : ನಮ್ಮ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಅನ್ಯ ಕಾರ್ಯ ನಿಮಿತ್ತವಾಗಿ ಉಪಸ್ಥಿತರಿಲ್ಲ. ಈ ಒಂದು ಕಾರಣದಿಂದ ಬೆಳ್ತಂಗಡಿಯಲ್ಲಿರುವ ಫೇಕ್ ಐಡಿಗಳಿಗೆ ಬಹಳಷ್ಟು ಕೆಲಸ ಸಿಗಲಿದೆ. ರಾತ್ರಿಯಿಡೀ ಅವರು ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ಕೆಲಸ ಮಾಡಲಿದ್ದಾರೆ ಎಂದು ಬಂಗೇರ ಬ್ರಿಗೇಡ್ ಬೆಳ್ತಂಗಡಿ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರ ಅವರು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರೋರ್ವರಿಗೆ ಟಾಂಗ್ ನೀಡಿದ್ದಾರೆ.

Advertisement

ಕೀರ್ತಿಶೇಷ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ 80ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಫೇಕ್ ಐಡಿ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಕುಂಬು ಮಂಡೆ(ಹಾಳಾಗಿರುವ ತಲೆ)ಗಳಿಗೆ ಹೇಳಲು ಬಯಸುತ್ತೇನೆ, ಖಾದರ್ ಅವರು ಊರಿನಲ್ಲಿರುತ್ತಿದ್ದರೆ ಖಂಡಿತಾ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈ ಕಬಡ್ಡಿ ಪಂದ್ಯಾಟಕ್ಕೆ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳು, ಖಾದರ್ ಸರ್, ರಮನಾಥ್ ರೈ ಸರ್ ಇವರನ್ನು ಸೇರಿಸಿಕೊಂಡೇ ಆಯೋಜನೆ ಮುಂದೆಯೂ ಮಾಡುತ್ತೇನೆ ಎಂದರು.

ಕಾರ್ಯಕ್ರಮವನ್ನು ಹೇಗಾದರೂ ಹಾಳು ಮಾಡಬೇಕೆಂದು ವಿಘ್ನ ಸಂತೋಷಿಗಳು ಕಾಯುತ್ತಿದ್ದಾರೆ. ಕಳೆದ ವರ್ಷವೂ ಅವರು ಸುಮಾರು ಆರು ಡಮ್ಮಿ ತಂಡಗಳನ್ನು ಹೆಸರು ನೋಂದಾಯಿಸುವ ಮೂಲಕ ಕಾರ್ಯಕ್ರಮವನ್ನು ಕೆಡವಲು ಪ್ರಯತ್ನಿಸಿದ್ದರು. ಆದರೆ, ಅದು ಸಫಲವಾಗಿಲ್ಲ. ಈಗ ಬೆಳ್ತಂಗಡಿಯಲ್ಲಿ ವಿಘ್ನ ಸಂತೋಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಇರಲಿಲ್ಲ, ಆದರೆ ಈಗ ವಿಘ್ನ ಸಂತೋಷಿಗಳೇ ಹೆಚ್ಚಾಗಿದ್ದಾರೆಂದು ಕಿಡಿಕಾರಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಗರಿಷ್ಠ ತಾಪಮಾನ – ಸೂರ್ಯಾಘಾತಕ್ಕೆ ಒಳಗಾದ ಬಾಲಕನ ದೇಹದಲ್ಲಿ ಸುಟ್ಟ ಗಾಯ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಆಶ್ರಯದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಪ್ರೌಢಶಾಲೆ ವಿಭಾಗದ ಬಾಲಕರ ಪಂದ್ಯಾಟ ಆರಂಭ

ಕರಾವಳಿ, ಟಾಪ್ ಸುದ್ದಿಗಳು

ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ – ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ

⚠️ Contents are protected on this website.