ಬೆಳ್ತಂಗಡಿ, ಆ. 29 : ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಕಾರ್ಯವೈಖರಿಗಳನ್ನು ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷದ ಒಲೈಕೆ ರಾಜಕಾರಣ ಹಾಗೂ ಭ್ರಷ್ಟಾಚಾರಕ್ಕೆ ಬೇಸತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಪುದುವೆಟ್ಟು ಇದರ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಮೋಹನ್ ಕೆ, ಅವರ ಪತ್ನಿ ಉಮಾದೇವಿ, ಮೊಮ್ಮಗ ಆದರ್ಶ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ ಪೂಜಾರಿಯವರು ಶಾಸಕರಾದ ಶ್ರೀ ಹರೀಶ್ ಪೂಂಜರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಯಶವಂತ್, ಶಕ್ತಿಕೇಂದ್ರ ಅಧ್ಯಕ್ಷರಾದ ಪೂರ್ಣಾಕ್ಷ, ಬೂತ್ ಅಧ್ಯಕ್ಷರಾದ ನಿತ್ಯಾನಂದ ಗೌಡ, ಸೋಯಿ ವರ್ಗೀಸ್, ಚಂದ್ರಹಾಸ ಗೌಡ, ಪ್ರಮುಖರಾದ ದಿವಾಕರ ಗೌಡ ಮುಚ್ಚಾರು, ಲಿಂಗಪ್ಪ ಸಾಲ್ಯಾನ್, ಭಾಸ್ಕರ ಅಡ್ಯ, ರಂಗನಾಥ್, ದಾಮೋದರ ಗೌಡ, ಹೊನ್ನಪ್ಪ ಗೌಡ, ಕುಕ್ಕಪ್ಪ ಗೌಡ, ಅಜಿತ್ ಜೈನ್, ಪ್ರಸನ್ನ ಹೆಬ್ಬಾರ್, ನಾರಾಯಣ ಪೂಜಾರಿ, ಶಶಿಧರ್ ಗುಂಪಕಲ್ಲು, ಧನ್ಯಕುಮಾರ್, ಶೇಖರ ಗೌಡ, ಶೇಖರ ಪೂಜಾರಿ, ಶಜು, ಸುರೇಶ್ ಕೇರ್ಯ, ಓಬಯ್ಯ ಮುಜಾರ್ ದಡ್ಡು, ಅಣ್ಣು ಗೌಡ, ಶ್ರೀಮತಿ ರೇಣುಕಾ, ರಮೇಶ್ ರಾವ್, ಅಕ್ಷತ್ ಗೌಡ,ಚೇತನ್ ಮುಚ್ಚಾರು ಮೊದಲಾದವರು ಉಪಸ್ಥಿತರಿದ್ದರು.




