ಮಹಾರಾಷ್ಟ್ರ, ಆ. 10 : ಎರಡು ತಿಂಗಳ ಮಗುವನ್ನು ಹೆತ್ತ ತಾಯಿ, ಸೋದರ ಮಾವ, ಅಜ್ಜ ಮತ್ತು ಅಜ್ಜಿ ಸೇರಿ ಬಾವಿಗೆ ಎಸೆದು ಕೊ*ಲೆ ಮಾಡಿರುವ ಘಟನೆ ಬೀದರ್ ಜಿಲ್ಲೆ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ನಡೆದಿದೆ. ಮಗು ನಾಪತ್ತೆಯಾಗಿರುವುದಾಗಿ ಹೇಳಿದ್ದ ಕುಟುಂಬದವರು ನಂತರ ದೇವರು ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕತೆ ಕಟ್ಟಿದ್ದಾರೆ.
ಈ ಕುರಿತು ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಸಮಗ್ರ ವಿಚಾರಣೆ ನಡೆಸಿದಾಗ ಮಗುವನ್ನು ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ. ಮಗುವಿನ ತಾಯಿ ವಾಣಿಶ್ರೀ(32), ಸೋದರಮಾವ ಸಂತೋಷ್ ಮಸ್ಕಲೆ (35), ಅಜ್ಜ ಬಸಪ್ಪ (70), ಅಜ್ಜಿ ರತ್ನಮ್ಮ (65) ಅವರನ್ನು ಸಂತಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಯಾವ ಕಾರಣಕ್ಕೆ ಮಗುವನ್ನು ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಲ್ಲಿ ತಿಳಿದು ಬರಬೇಕಿದೆ. ವಾಣಿಶ್ರೀಯನ್ನು ಮಹಾರಾಷ್ಟ್ರದ ಕವಳಗಡ ಗ್ರಾಮದ ಸಂಜಯ್ ಜೊತೆಗೆ ಮದುವೆ ಮಾಡಲಾಗಿತ್ತು. ಹೆರಿಗೆಯ ನಂತರ ಈಕೆ ತವರು ಮನೆಯಲ್ಲಿದ್ದರು




