ಬೆಳ್ತಂಗಡಿ, ಆ. 11 : ಇತ್ತೀಚಿಗೆ ಕರ್ನಾಟಕ ಟಿವಿ ಮಾಧ್ಯಮ ಪ್ರಾಯೋಜಿತ “ಬೆಸ್ಟ್ ಲೀಡರ್ ಅವಾರ್ಡ್ ” ಪ್ರಶಸ್ತಿ ಗೆ ಬಾಜನರಾದ ಬೆಳ್ತಂಗಡಿ ತಾಲೂಕಿನ ಜನಮೆಚ್ಚಿದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರನ್ನು ಸ್ವಗೃಹ ಮಿಥಿಲಾದಲ್ಲಿ ಟೀಮ್ ದಕ್ಷಿಣ ಕಾಶಿ (ರಿ) ಉಪ್ಪಿನಂಗಡಿಯ ಪರವಾಗಿ ಗೌರವಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಟೀಮ್ ದಕ್ಷಿಣಕಾಶಿಯ ನೂತನ ಅಧ್ಯಕ್ಷರಾದ ವಿಧ್ಯಾಧರ ಜೈನ್, ಗೌರವ ಅಧ್ಯಕ್ಷ ರಾದ ರವಿ ಇಳಂತಿಲ, ಉಪಾಧ್ಯಕ್ಷರಾದ ತಿಮ್ಮಪ್ಪ ಇಳಂತಿಲ, ಮಾಜಿ ಅಧ್ಯಕ್ಷ ರಾದ ಪ್ರಸನ್ನ ಪೆರಿಯಡ್ಕ, ಸದಸ್ಯರಾದ ಸುನೀಲ್ ಅನಾವು, ಲಕ್ಷ್ಮೀಶ್ ಪಾಡೆಂಕಿ, ಗಿರೀಶ್ ಇಳಂತಿಲ ಉಪಸ್ಥಿತರಿದ್ದರು.




