ದುಬೈನಲ್ಲಿ ಸಡಗರದ ಕ್ರೀಡಾಕೂಟ : ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

ದುಬೈ : ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿವಂಗತ ಶ್ರೀಮತಿ ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು.

Advertisement

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ ಸಲಹೆಗಾರರಾದ ಹರೀಶ್ ಕೋಡಿ ಮತ್ತು ಸುನಿಲ್ ಮೊಟ್ಟೆಮನೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮೀನಾ ಹರೀಶ್ ಕೋಡಿ, ಸುಪ್ರೀತಾ ಸುರೇಶ್, ರಕ್ಷಿತಾ ದೇರಾಜೆ ಹಾಗೂ ಮಾನಸ ದಿಲೀಪ್ ಉಳುವಾರು ಪ್ರಾರ್ಥನೆ ಸಲ್ಲಿಸಿದರೆ, ಯತೀಶ್ ಗೌಡ ಅವರು ಸ್ವಾಗತ ಭಾಷಣ ಮಾಡಿದರು. ಗಣೇಶ್ ಅಚ್ಚಂಡಿರ, ಆನಂದ್ ಪಟ್ಟೆ ವಳಾಲ್, ದಿಲೀಪ್ ಉಳುವಾರು ಮತ್ತು ಸುನಿಲ್ ಕರ್ಣಾಯನ ಅವರು ಪಂದ್ಯಾವಳಿಯ ಉದ್ಘಾಟನಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಜಿದ್ದಾಜಿದ್ದಿನಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ‘ಗೌಜಿ ಗಮ್ಮತ್’ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು ಹಾಗೂ ‘ಕೂರ್ಗ್ ವಾರಿಯರ್ಸ್’ ತಂಡವು ರನ್ನರ್-ಅಪ್ ಪ್ರಶಸ್ತಿ ಪಡೆಯಿತು. ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ತ್ರೋಬಾಲ್ ಸೀಸನ್-1 ಪಂದ್ಯಾವಳಿಯಲ್ಲಿ 4 ತಂಡಗಳು ಪಾಲ್ಗೊಂಡಿದ್ದು, ‘ದುಬೈ ರಾಯಲ್ಸ್’ ಪ್ರಥಮ ಸ್ಥಾನ ಹಾಗೂ ‘ಟೀಂ ಬಾವಾಸ್’ ದ್ವಿತೀಯ ಸ್ಥಾನ ಗಳಿಸಿತು. ಉತ್ತಮ ಶಿಸ್ತಿನ ತಂಡ ಪ್ರಶಸ್ತಿಯ ಪ್ರಾಯೋಜಕರಾದ ಆನಂದ್ ವಳಾಲ್ ರವರು ಗೌಡ ಫ್ರೆಂಡ್ಸ್ ಕ್ಲಬ್ ಗೆ ಪ್ರಶಸ್ತಿಯನ್ನು ನೀಡಿದರು. ಕ್ರೀಡಾಕೂಟದ ಅಂಗವಾಗಿ ನಡೆದ ಮಹಿಳೆಯರ ಹಗ್ಗಜಗ್ಗಾಟ ಎಲ್ಲರ ಗಮನ ಸೆಳೆಯಿತು. ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಮನರಂಜನಾ ಆಟಗಳನ್ನು ಆಯುಶ್ ಕೋಡಿ ಮತ್ತು ಕಾವ್ಯ ಅವಿನಾಶ್ ರವರು ಅತ್ಯಂತ ಉತ್ಸಾಹದಿಂದ ನಿರ್ವಹಿಸಿದರು. ಕ್ರಿಕೆಟ್ ಪಂದ್ಯಾವಳಿಯ ತೀರ್ಪುಗಾರರಾಗಿ ಗಿರೀಶ್, ಸುಧೀರ್ ಮತ್ತು ಮನೋಜ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿದರು. ಕಾರ್ಯಕ್ರಮದುದ್ದಕ್ಕೂ ಮನೋಜ್ ಕುಲಾಲ್ ಅವರು ತಮ್ಮ ಆಕರ್ಷಕ ವಾಗ್ಝರಿಯ ಮೂಲಕ ಕಾಮೆಂಟರಿ ನಿರ್ವಹಿಸಿದರು. ಕ್ರೀಡಾ ಸಂಯೋಜಕರಾಗಿ ಪ್ರಶಾಂತ್ ವಿಟ್ಲ, ನಾಗೇಶ್, ಅಕ್ಷತ್ ಮಲ್ಲಿ ಹಾಗೂ ಅನೀಶ್ ಶೆಟ್ಟಿ ಅವರು ಸಹಕರಿಸಿದರು. ಕ್ರೀಡಾಕೂಟಕ್ಕೆ ಹರ್ಷ ತುಂಬಲು ಮೋಹನಿಶ್ ಕೊಂಬಾರನ ಅವರು ಡಿಜೆ ಸಂಗೀತದ ಮೂಲಕ ಮೆರುಗು ನೀಡಿದರೆ, ಕಿರಣ್ ಬೆದ್ರೋಡಿ ಮತ್ತು ಲಕ್ಷ್ಮೀನಾರಾಯಣ ಕಣ್ವತೀರ್ಥ ಅವರು ಇಡೀ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಕ್ಯಾಮೆರಾದ ಮೂಲಕ ಸೆರೆಹಿಡಿದರು.

ಬೆಳಗಿನ ಮತ್ತು ಸಂಜೆಯ ಉಪಹಾರದ ವ್ಯವಸ್ಥೆಯನ್ನು ಸುಪ್ರೀತ್ ಕುಂಡಡ್ಕ, ಮೋಹನ್ ತೂಟೇರ, ನಿತಿನ್ ಧೋರ್ತೋಡಿ, ಸುನಿಲ್ ಮೊಟ್ಟೆಮನೆ, ವಿನೋದ್ ಬಳ್ಳಡ್ಕ, ಅಜಿತ್ ಮಡ್ಕೂರು ಒದಗಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್ ಗೌಡ ವಹಿಸಿದ್ದರು. ವಿಜೇತರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿದರು. ತೇಜ್ ಕೊರಂಬಡ್ಕ ಅವರು ಸಂಘದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದಿಲೀಪ್ ಉಳುವಾರು ವಂದನಾರ್ಪಣೆ ಮಾಡಿದರು. ನಿತಿನ್ ಧೋರ್ತೋಡಿ ಮತ್ತು ಶ್ರಾವ್ಯ ಗೌಡ ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದರು. ಮುಖ್ಯ ಪ್ರಾಯೋಜಕರಾಗಿ ಸುರೇಶ್ ಕುಂಪಲ ಡುಮೆಕ್ ಇಂಜಿನಿಯರಿಂಗ್ ವರ್ಕ್ಸ್, ಮೋಹನ್ ಮೋಳ್ಟೆನ್ ಟೆಕ್ನಿಕಲ್ ಸರ್ವೀಸೆಸ್, ಶೆಟ್ಟಿ ಲಂಚ್ ಹೋಂ, ಪ್ರಸೀಧ್ ಗೌಡ ಹ್ಯಾವೆನ್ ಸ್ಟೋನ್, ಯತೀಶ್ ಗೌಡ ಫಸ್ಟ್ ಮೊಲಿಕ್ಯೂಲ್ ಕಾರ್ಬನ್ಸ್, ಪುಲೋಮ ಗೌಡ ಬೆಟರ್ ವೇ ಕನ್ಸಲ್ಟಿಂಗ್ ಸರ್ವೀಸಸ್ ಮತ್ತು ಚಂದ್ರ ಬೆದ್ರೋಡಿಯವರು ಸಹಕರಿಸಿದ್ದರು. ರೋಶನ್ ಕಂಪ ಮತ್ತು ಶರತ್ ಚೊಕ್ಕಾಡಿ ಅವರ ನೇತೃತ್ವದಲ್ಲಿ ಇಡೀ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು. ಸುಮಾರು 400ಕ್ಕೂ ಹೆಚ್ಚು ಸಮಾಜ ಬಾಂಧವರು ಈ ಕ್ರೀಡಾ ಸಂಭ್ರಮದಲ್ಲಿ ಪಾಲ್ಗೊಂಡು ಕೊನೆಯಲ್ಲಿ ಇಡೀ ಕ್ರೀಡಾಂಗಣವನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಚ ಗೊಳಿಸಿರುವುದು ವಿಶೇಷವಾಗಿತ್ತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.