ರತ್ನಗಿರಿ, ಮಾ. 20 : ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಆಸ್ತಿಗಳನ್ನು ಹಲವು ವರ್ಷಗಳಿಂದ ವಿಫಲ ಪ್ರಯತ್ನಗಳ ನಂತರ ಕೊನೆಗೂ ಮಾರಾಟ ಮಾಡಲಾಗಿದೆ.
ಕೇಂದ್ರ ಸರಕಾರವು 2026 ಮಾರ್ಚ್ 5ರಂದು ಹರಾಜು ಪ್ರಕ್ರಿಯೆಯನ್ನು ನಡೆಸಿದೆ. ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ವಿಲೇವಾರಿ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ರತ್ನಗಿರಿಯ ಮುಂಬಾಕೆ ಗ್ರಾಮದಲ್ಲಿರುವ ನಾಲ್ಕು ಕೃಷಿ ಭೂಮಿಗಳನ್ನು ಹರಾಜು ಮಾಡಲಾಗಿದೆ. ಭೂಮಿಯನ್ನು ದಾವೂದ್ ಇಬ್ರಾಹಿಂ ನ ತಾಯಿ ಅಮಿನಾ ಬಿ ರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.
ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಗಳ ಆಸ್ತಿ ಮುಟ್ಟುಗೋಲು ಕಾಯ್ದೆ (SAFEMA) ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅಧಿಕಾರಿಗಳಿಗೆ ಕಳ್ಳಸಾಗಣೆ ಮತ್ತು ಅಕ್ರಮ ಸಂಪತ್ತಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆ ಅನುವು ಮಾಡಿಕೊಡುತ್ತದೆ. ಅಧಿಕಾರಿಗಳ ಪ್ರಕಾರ, ಇತ್ತೀಚಿನ ಹರಾಜಿನಲ್ಲಿ ಇಬ್ಬರು ಖರೀದಿಸಿದ್ದು, ಮುಂಬೈ ಮೂಲದ ಒಬ್ಬ ವ್ಯಕ್ತಿ ಒಂದು ನಿವೇಶನವನ್ನು ಪಡೆದುಕೊಂಡರೆ, ಮತ್ತೊಬ್ಬರು ಉಳಿದ ಮೂರು ಆಸ್ತಿಗಳನ್ನು ಅತಿ ಹೆಚ್ಚು ಬೆಲೆಗೆ ಪಡೆದುಕೊಂಡಿದ್ದಾರೆ. ಇಬ್ಬರೂ ಖರೀದಿದಾರರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ.
ಈ ಆಸ್ತಿಗಳನ್ನು ಮಾರಾಟ ಮಾಡುವ ಪ್ರಯತ್ನಗಳು ವರ್ಷಗಳಿಂದ ನಡೆಯುತ್ತಿದ್ದವು, 2017, 2020, 2024 ಮತ್ತು 2025 ರಲ್ಲಿ ನಡೆಸಲಾದ ಹರಾಜುಗಳು ಯಶಸ್ವಿ ಬಿಡ್ಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದವು.

