ಇಂದಬೆಟ್ಟು : ಕಟ್ಟಿಹಾಕಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಕಾಡುಪ್ರಾಣಿ – ಬೃಹತ್ ಹೆಜ್ಜೆಗುರುತು ಪತ್ತೆ !

ಇಂದಬೆಟ್ಟು, ಮೇ 25 : ಮನೆಯೊಂದರ ಅಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕಾಡುಪ್ರಾಣಿಯು ಹೊತ್ತೊಯ್ದಿರುವ ಘಟನೆ ಮೇ 23ರಂದು ವರದಿಯಾಗಿದೆ.

Advertisement

ದಿ ನಾರಾಯಣ ನಾಯ್ಕ್ ಎಂಬವರ ಸಾಕು ನಾಯಿಯನ್ನು ಕಾಡುಪ್ರಾಣಿಯೊಂದು ಎಳೆದೊಯ್ದಿದೆ ಎನ್ನಲಾಗಿದೆ. ಕಳೆದ ವಾರ ಇಂದಬೆಟ್ಟು ಗ್ರಾಮದ ಕಜೆ ಪಿಲಪ್ಪಾಡಿ ಡೀಕಯ್ಯ ನಾಯ್ ಅವರ ಮನೆಯಿಂದ ಟರ್ಕಿ ಕೋಳಿಗಳನ್ನು ಕೊಂಡು ಹೋದ ಬಗ್ಗೆ ವರದಿ ಪಡೆದ ಅರಣ್ಯ ಇಲಾಖೆ ಅದೇ ದಿನ ಬೋನ್ ಅಳವಡಿಕೆ ಮಾಡಲಾಗಿತ್ತು. ಆದರೆ ಒಂದು ವಾರದಿಂದ ಆ ಕಡೆಗೆ ಸುಳಿಯದ ಕಾಡುಪ್ರಾಣಿ ಮೇ. 23ರಂದು ಹತ್ತಿರದ ಮನೆಯ ನಾಯಿಯನ್ನು ಕೊಂಡು ಹೋಗಿದೆ.

ಅಲ್ಲದೆ ದಿ ಕೊರಗಪ್ಪ ನಾಯ್ಕ ಅವರ ಕೊಟ್ಟಿಗೆಗೆ ಸುತ್ತು ಬಂದಿದ್ದು ಭಾರಿ ದೊಡ್ಡ ಗಾತ್ರದ ಹೆಜ್ಜೆ ಗುರುತು ಪತ್ತೆಯಾಗಿದೆ. ಬೃಹತ್ ಗಾತ್ರದ ಹೆಜ್ಜೆ ಗುರುತು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.