ಇಂದಬೆಟ್ಟು, ಮೇ 25 : ಮನೆಯೊಂದರ ಅಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕಾಡುಪ್ರಾಣಿಯು ಹೊತ್ತೊಯ್ದಿರುವ ಘಟನೆ ಮೇ 23ರಂದು ವರದಿಯಾಗಿದೆ.
ದಿ ನಾರಾಯಣ ನಾಯ್ಕ್ ಎಂಬವರ ಸಾಕು ನಾಯಿಯನ್ನು ಕಾಡುಪ್ರಾಣಿಯೊಂದು ಎಳೆದೊಯ್ದಿದೆ ಎನ್ನಲಾಗಿದೆ. ಕಳೆದ ವಾರ ಇಂದಬೆಟ್ಟು ಗ್ರಾಮದ ಕಜೆ ಪಿಲಪ್ಪಾಡಿ ಡೀಕಯ್ಯ ನಾಯ್ ಅವರ ಮನೆಯಿಂದ ಟರ್ಕಿ ಕೋಳಿಗಳನ್ನು ಕೊಂಡು ಹೋದ ಬಗ್ಗೆ ವರದಿ ಪಡೆದ ಅರಣ್ಯ ಇಲಾಖೆ ಅದೇ ದಿನ ಬೋನ್ ಅಳವಡಿಕೆ ಮಾಡಲಾಗಿತ್ತು. ಆದರೆ ಒಂದು ವಾರದಿಂದ ಆ ಕಡೆಗೆ ಸುಳಿಯದ ಕಾಡುಪ್ರಾಣಿ ಮೇ. 23ರಂದು ಹತ್ತಿರದ ಮನೆಯ ನಾಯಿಯನ್ನು ಕೊಂಡು ಹೋಗಿದೆ.
ಅಲ್ಲದೆ ದಿ ಕೊರಗಪ್ಪ ನಾಯ್ಕ ಅವರ ಕೊಟ್ಟಿಗೆಗೆ ಸುತ್ತು ಬಂದಿದ್ದು ಭಾರಿ ದೊಡ್ಡ ಗಾತ್ರದ ಹೆಜ್ಜೆ ಗುರುತು ಪತ್ತೆಯಾಗಿದೆ. ಬೃಹತ್ ಗಾತ್ರದ ಹೆಜ್ಜೆ ಗುರುತು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.


