ಕಾರ್ಕಳ, ಜು. 19 : ತಾಲೂಕಿನ ಹಿರ್ಗಾನ ಗ್ರಾಮದ ಮೂಜೂರು(ಮೂರೂರು) ಪಾಡಿಗರಡಿ ನೇತೃತ್ವದಲ್ಲಿ ಇಂದು “ಆಟಿಡೊಂಜಿ ಕೂಟ” ಕಾರ್ಯಕ್ರಮವು ಪಾಡಿಗರಡಿ ಪರಿಸರದಲ್ಲಿ ಅದ್ಧೂರಿಯಾಗಿ ನಡೆಯಿತು.

ಬೆ. 09 ಗಂಟೆಗೆ ಉದ್ಘಾಟನೆ, ಸಂಜೆ 05 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನೆರವೇರಿತು.

ಕಾರ್ಯಕ್ರಮಕ್ಕೆ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಶುಭಹಾರೈಸಿದರು.

ಆಟಿಡೊಂಜಿ ಕೂಟದ ಅಂಗವಾಗಿ ಆಟಿ ತಿಂಗಳ ವಿಶೇಷ ಭೋಜನ ಮತ್ತು ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು ನಡೆದಿದ್ದು, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.


