ಬೆಳ್ತಂಗಡಿ, ಮೇ 25 : ತಾಲೂಕಿನ ಮಿತ್ತಬಾಗಿಲು ಗ್ರಾಮದ ವಳಚ್ಚಿಲ ಬೆಟ್ಟು ಕೊಲ್ಲಿ ನಿವಾಸಿ ಸುಧಾಕರ ಪೂಜಾರಿ ಅವರ ಮನೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಕಿಟಕಿ ಬಾಗಿಲು ತೆರೆದಿಟ್ಟ ಕಾರಣ ಮೇ .24 ರಂದು ಪತ್ತೆಯಾಗಿದೆ.
ಮನೆಯ ಟಿವಿ ಶೋ ಕೇಸ್ ಬಳಿ ದೂಡ್ಡ ಗಾತ್ರದ ವಿಷಪೂರಿತ ಕಾಳಿಂಗ ಸರ್ಪ ಇರುವುದನ್ನು ಗಮನಿಸಿದ ಮನೆಯವರು ತಕ್ಷಣವೇ ಸ್ಥಳೀಯರಿಗೆ ಮತ್ತು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪರಿಣಿತ ಉರಗ ರಕ್ಷಕರು ಸಾರ್ವಜನಿಕರ ಸಹಾಯದೊಂದಿಗೆ ಹಾವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಉರಗ ತಜ್ಞರು ರಕ್ಷಿಸಲಾದ ಕಾಳಿಂಗ ಸರ್ಪವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

