ಮಂಗಳೂರು, ಜು. 9 : ದಕ್ಷಿಣ ಕನ್ನಡದಲ್ಲಿ ಮಳೆ ಜೋರಾದ ಹಿನ್ನೆಲೆ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿದ್ದು, ಹಲವು ಕಡೆ ಶಾಲೆಗಳನ್ನ ನಡೆಸಿದೆ. ಇದೀಗ ಈ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಭಾರೀ ಮಳೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕೆಲ ಖಾಸಗಿ ಶಾಲೆಗಳು ರಜೆ ದಿನವೂ ಶಾಲೆ ನಡೆಸಿರುವ ಬಗ್ಗೆ ದೂರು ಬಂದಿದ್ದು, ಹೆಚ್ಚಾಗಿ ವಿದ್ಯಾರ್ಥಿಗಳೇ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಎಲ್ಲಾ ಶಾಲೆಗಳಿಗೆ ನೋಟಿಸ್ ನೀಡಿದೆ.
ಮೂರು ಬಾರಿಯೂ ರಜೆ ಕೊಡದೆ ನಿರ್ಲಕ್ಷ್ಯ
ದಕ್ಷಿಣ ಕನ್ನಡದಲ್ಲಿ ಮಳೆ ಜೋರಾದ ಹಿನ್ನೆಲೆ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿದ್ದು, ಹಲವು ಕಡೆ ಶಾಲೆಗಳನ್ನ ನಡೆಸಿದೆ. ಬಳಿಕ ಮೊದಲಿಗೆ ಜಿಲ್ಲಾಡಳಿತ ಈ ಶಾಲೆ ಕಾಲೇಜುಗಳಿಗೆ ಎಚ್ಚರಿಕೆ ನೀಡಿ ರಜೆ ಘೋಷಣೆ ಮಾಡುವಂತೆ ಸೂಚನೆ ನೀಡಿತ್ತು. ನಂತರ ಎರಡನೇ ಬಾರಿ ಕೂಡ ರಜೆ ಘೋಷಣೆ ಮಾಡಿದಾಗ ಕೂಡ ಇದೇ ರೀತಿ ನಡೆದಾಗಲೂ ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸುವ ಕೆಲಸ ಮಾಡಿತ್ತು. 2 ಬಾರಿಯಷ್ಟೇ ಅಲ್ಲ ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘಿಸಿ ಕ್ಲಾಸ್ ನಡೆಸಿದೆ.


