ಕೋಲ್ಕತಾ : ಮಾಜಿ ಸಿಎಂ ಮಮತಾ ಬ್ಯಾನರ್ಜಿಯನ್ನು ‘ಕಳ್ಳಿ, ಡಕಾಯಿತಿ’ ಎಂದು ಕರೆದು ಚಪ್ಪಲಿ ಎಸೆದ ಕಿಡಿಗೇಡಿಗಳು !

Advertisement

ಕೋಲ್ಕತಾ, ಆ. 10 : ಪೊಲೀಸ್ ವಶದಲ್ಲಿ ಮೃತಪಟ್ಟ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾಗಲೆಂದು ತೆರಳಿದ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ, ಕೆಸರು, ಕಲ್ಲುಗಳನ್ನು ಎಸೆದಿರುವ ಘಟನೆ ಭಾನುವಾರ ನಡೆದಿದೆ. ಜೊತೆಗೆ, ‘ಕಳ್ಳಿ, ಡಕಾಯಿತಿ’ ಎಂದೂ ಘೋಷಣೆ ಕೂಗಲಾಗಿದೆ.

Advertisement

ಉತ್ತರ 24 ಪರಗಣ ಜಿಲ್ಲೆಯ ಹಲೀಸಹರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಇದು ಬಿಜೆಪಿ ಹಾಗೂ ಟಿಎಂಸಿ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ, ‘ಇದು ವ್ಯವಸ್ಥಿತ ಸಂಚು. ನಾನು ಇಲ್ಲಿಗೆ ಬರುವ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೂ, ಯಾವುದೇ ಭದ್ರತೆ ಕೈಗೊಂಡಿರಲಿಲ್ಲ. ದೊಡ್ಡ ಇಟ್ಟಿಗೆಗಳನ್ನೂ ನನ್ನ ಕಾರಿನ ಮೇಲೆ ಎಸೆಯಲಾಯಿತು. ನನ್ನ ತಲೆ ಒಡೆಯುತ್ತಿತ್ತು. ನಾನು ಸಾಯುತ್ತಿದ್ದೆ’ ಎಂದಿದ್ದಾರೆ. ಇನ್ನೊಂದೆಡೆ, ಮಮತಾ ಅವರು ಜನರನ್ನು ಪ್ರಚೋದಿಸಲೆಂದೇ ಇಲ್ಲಿಗೆ ಬಂದಿದ್ದರು. ಅದಕ್ಕೆ ಸ್ಥಳೀಯರೇ ಅವರ ವಿರುದ್ಧ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಹೇಳಿದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ