ಬೆಳ್ತಂಗಡಿ : ಮನೆ ಸಮೀಪದಲ್ಲೇ ಕಾಡಾನೆ ಠಿಕಾಣಿ – ಮನೆಮಂದಿಗೆ ಆತಂಕ

ಮಲವಂತಿಗೆ, ಜ. 19 : ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ರವಿವಾರ ಸಂಜೆಯ ವೇಳೆಗೆ ಮನೆಯೊಂದರ ಸಮೀಪದಲ್ಲೇ ಆನೆಯೊಂದು ಠಿಕಾಣಿ ಹೂಡಿ ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ. ದಿಡುಪೆಯ ರುಕ್ಮಯ್ಯ ಗೌಡ ಅವರ ಮನೆ ಸಮೀಪ ರವಿವಾರ ಸಂಜೆ 6ರ ಸುಮಾರಿಗೆ ಕಾಡಾನೆ ಕಂಡು ಬಂದಿದ್ದು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಪ್ರಯತ್ನಪಟ್ಟರೂ ಅದು ಕದಲದೆ ಅಲ್ಲೇ ನಿಂತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement

ಜ. 17ರ ರಾತ್ರಿ ಕಾಡಾನೆ ದಿಡುಪೆಯ ಜನತಾ ಕಾಲನಿ, ಪೇಟೆ ಪರಿಸರ ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳಲ್ಲೇ ಸಂಚರಿಸಿದೆ ಎನ್ನಲಾಗಿದೆ. ಅಲ್ಲದೆ, ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆ ಸಂಚಾರ ಕಂಡು ಬಂದಿದೆ. ಜೊತೆಯಲ್ಲಿ ಚಿರತೆಯ ಹಾವಳಿಯೂ ಹೆಚ್ಚಾಗಿದ್ದು, ಜನತೆ ಆತಂಕ ಪಡುವಂತಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಗರಿಷ್ಠ ತಾಪಮಾನ – ಸೂರ್ಯಾಘಾತಕ್ಕೆ ಒಳಗಾದ ಬಾಲಕನ ದೇಹದಲ್ಲಿ ಸುಟ್ಟ ಗಾಯ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಆಶ್ರಯದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಪ್ರೌಢಶಾಲೆ ವಿಭಾಗದ ಬಾಲಕರ ಪಂದ್ಯಾಟ ಆರಂಭ

ಕರಾವಳಿ, ಟಾಪ್ ಸುದ್ದಿಗಳು

ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ – ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ

⚠️ Contents are protected on this website.