ಬೆಳ್ತಂಗಡಿ, ಮಾ. 30 : ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಕನ್ಯಾಡಿ | ಗ್ರಾಮದ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿನ ವರ್ಷಾವಧಿ ಜಾತ್ರೆ, ನಡ್ವಾಲ್ ಸಿರಿಜಾತ್ರೆಯ ಮಹೋತ್ಸವ ಮಾರ್ಚ್ 31 ರಿಂದ ಎಪಿಲ್ 04 ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಮಾರ್ಚ್ 31ರಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭೂತರಾಜ ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ
ಏ. 01ರಂದು ಶ್ರೀ ದೇವರ ಉತ್ಸವ, ಸಾಂಸ್ಕೃತಿಕ ವೈಭವ, ಅಬ್ಬಗ ದಾರಗರ ಚೆನ್ನೆಮಣೆ ಆಟ, ಮೂಲ ಮಹಿಷಂತಾಯ ನೇಮ, ರಕ್ತೇಶ್ವರಿ ನೇಮ ಜರುಗಲಿದೆ.

ಏ. 02ರಂದು ಆಶ್ಲೇಷಾ ಬಲಿ, ಶ್ರೀ ನಾಗದರ್ಶನ ಸೇವೆ, ವಾರ್ಷಿಕ ನಡ್ವಾಲ್ ಸಿರಿಜಾತ್ರೆ ಹಾಗೂ ಸ್ವಾತಿ ಮೆಲೊಡೀಸ್ ಕಾರ್ಯಾಣ ಇವರಿಂದ ರಸಮಂಜರಿ, ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಏ. 03ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಏ. 04ರಂದು ಗ್ರಾಮ ದೈವ ಪಿಲಿಚಾಮುಂಡಿ ದೈವದ ನೇಮ, ದರ್ಶನ ಬಲಿ, ಮಹಾಪೂಜೆ ನಡೆಯಲಿದೆ.



