ಬೆಳ್ತಂಗಡಿ, ಆ. 31 : ನಲಿಕೆಯವರ ಸಮಾಜ ಸೇವಾ ಸಂಘ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾರವರನ್ನು ಉತ್ತಮ ಶಾಸಕ ಪ್ರಶಸ್ತಿ ಪಡೆದ ನಿಟ್ಟಿನಲ್ಲಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ನಲಿಕೆ ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ಸೇಸಪ್ಪ ನಲಿಕೆ, ದೈವರಾಧನೆ ಬೆಳ್ತಂಗಡಿ ತಾಲ್ಲೂಕಿನ ಅಧ್ಯಕ್ಷರಾದ ಗೋಪಾಲ ನಲಿಕೆ, ಕಾಶಿಪಟ್ನ ನಲಿಕೆ ಸಮಾಜದ ನೂತನ ಅಧ್ಯಕ್ಷರಾದ ರಾಮು ಶಿಶಿಲ, ಕಾನೂನು ಸಲಹೆಗಾರ್ತಿ ವಿನಿತಾ ಪೆರ್ಮುಡ, ಸುಬ್ರಾಯ ಕಲ್ಮoಜ, ನಿಕಟಪೂರ್ವ ಅಧ್ಯಕ್ಷರು ಕರ್ನಾಟಕ ರಾಜ್ಯ ನಲಿಕೆಯವರ ಸಮಾಜ ಸೇವಾ ಸಂಘ (ರಿ )ಪುತ್ತೂರು, ಸಮಾಜದ ಪ್ರಮುಖರಾದ ತಿಮ್ಮಪ್ಪ ವೇಣೂರು, ರಂಜಿನಿ ಮುಂಡಾಜೆ, ಅನಂತು ಮುಂಡಾಜೆ, ಲಕ್ಷ್ಮಣ ಬೊಳ್ಳುರು, ಸುಂದರ ಮುಂಡಾಜೆ, ಗಣೇಶ್ ಕೋಟ್ಯಾನ್ ಚಾರ್ಮಾಡಿ, ಕಿರಣ್ ಅರ್ವ, ಹಿರಿಯರಾದ ಗೋಪಿ ನಲಿಕೆ ಸಮಾಜದ ಇನ್ನಿತರರು ಉಪಸ್ಥಿತರಿದ್ದರು.




