ಬೆಳ್ತಂಗಡಿ, ಏ. 01: ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಮಾ.31ರ ಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಶಾಸಕ ಹರೀಶ್ ಪೂಂಜ ವಿಚಾರಿಸಿದರು.
ಉಜಿರೆಯ ಎಸ್ ಡಿ ಎಂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯನ್ನು ಮಾತನಾಡಿಸಿ, ಘಟನೆಯ ಬಗ್ಗೆ ವಿವರಣೆ ಪಡೆದುಕೊಂಡರು.ಈ ವೇಳೆ ಗಾಯಾಳು ವಿದ್ಯಾರ್ಥಿನಿಯರ ತಂದೆ ನಾಗರಾಜ್, ತಾಯಿ ರೂಪರವರಿಗೂ ಧೈರ್ಯ ತುಂಬಿದರು.



