ಬಂಟ್ವಾಳ, ಆ. 17 : ತಾಲೂಕಿನ ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿ ಸುಭಾಷ್ ಯುವಕ ಮಂಡಲ ರಿ.ಶ್ರೀ ಶಾರದಾ ಪೂಜಾ ಸಮಿತಿ ಸುಭಾಷ್ ನಗರ ವತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವ 99 ವರ್ಷಗಳನ್ನು ಪೂರೈಸಿ ಇದೀಗ 100ನೇ ವರ್ಷ ಅಂದರೆ ಶತಮಾನೋತ್ಸವ ಆಚರಿಸಲು ಸಿದ್ದವಾಗಿದೆ.

ಇನ್ನು ಈ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ಇಂದು ಸಜೀಪ ಮಾಗಣೆಯ ನಾಲ್ಕು ಗ್ರಾಮಗಳ ಎಲ್ಲಾ ಸಂಘ ಸಂಸ್ಥೆಗಳನ್ನು ಕರೆದು ಸಭೆಯನ್ನು ನಡೆಸಲಾಯಿತು.ಈ ಸಂಧರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀವಿವೇಕ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಿದರು.

ಇನ್ನು ಎಲ್ಲಾ ಸಂಘ ಸಂಸ್ಥೆಗಳ ಸಲಹೆಗಳನ್ನು ಪಡೆದು 100ನೇ ವರ್ಷದ ಈ ಪುಣ್ಯ ಕಾರ್ಯಕ್ರಮನ್ನು ಅದ್ಧೂರಿಯಾಗಿ ಮಾಡುವ ಎಂಬ ಸಂಕಲ್ಪವನ್ನೂ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀಕಾಂತ್ ಶೆಟ್ಟಿ ಸಂಕೇಶ ,ರವೀಂದ್ರ ಕಂಬಲಿ,ಯಶವಂತ ದೇರಾಜೆ,ಶ್ರೀ ದೇವಿಪ್ರಸಾದ್ ಪೂಂಜ,ಪುಷ್ಪಾರಮೇಶ್,ಇನ್ನಿತರರು ಉಪಸ್ಥಿತರಿದ್ದರು.





