ಕಲ್ಮಂಜ, ಏ. 27 : ಸಂಗಮ ಕ್ಷೇತ್ರ ಪಜೀರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಇಂದು ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಲೋಕಕಲ್ಯಾಣಾರ್ಥವಾಗಿ ರಂಗ ಪೂಜೆ ನೆರವೇರಿತು.

ಲೋಕಕಲ್ಯಾಣಾರ್ಥವಾಗಿ ನಡೆದ ರಂಗಪೂಜೆಯ ಬಳಿಕ ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಅನ್ನದಾನ ಸೇವೆಯೂ ನಡೆಯಿತು.

ಈ ಸಂದರ್ಭದಲ್ಲಿ ಸಂಗಮ ಶ್ರೀ ಯುವಕ ಮಂಡಲ (ರಿ.) ಅಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ ಮದಿಮಲ್ ಕಟ್ಟೆ, ಕಾರ್ಯದರ್ಶಿ ಶ್ರೀ ಪ್ರವೀಣ್ ಗೌಡ ಕರಿಯನೆಲ, ಅರ್ಚಕರಾದ ಶ್ರೀ ರಾಜೇಶ್ ಭಟ್, ಶ್ರೀ ಅನಿಲ್, ಶ್ರೀ ಸಾಂತಪ್ಪ, ಶ್ರೀ ಮುರಳಿ, ಶ್ರೀ ಲೋಕೇಶ್, ಶ್ರೀ ಧನಂಜಯ, ಶ್ರೀ ಸಂದೀಪ್, ಶ್ರೀ ವಿನೋದ್ ರಾಜ್, ಶ್ರೀ ಗುರುರಾಜ್, ಶ್ರೀ ರಾಘವ ಕಲ್ಮಂಜ, ಶ್ರೀ ದಿನೇಶ್ ಅಜೆಕುರಿ, ಶ್ರೀ ಕುಶಾಲಪ್ಪ, ಶ್ರೀ ಗಂಗಾಧರ, ಶ್ರೀ ನವೀನ್, ಶ್ರೀ ಗಿರಿಧರ, ಶ್ರೀ ಸಂತೋಷ್, ಶ್ರೀ ನಾಗೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

