ಬೆಳ್ತಂಗಡಿ, ಏ. 10 : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿನಿ ಶ್ರೀಷಾ ಸುವರ್ಣ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 558 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಮಲವಂತಿಗೆ ಗ್ರಾಮದ ಮಾಲೂರು ನಿವಾಸಿ ಉಮೇಶ್ ಸುವರ್ಣ ಹಾಗೂ ಪ್ರಮೀಳ ದಂಪತಿಯ ಪುತ್ರಿಯಾಗಿದ್ದಾರೆ. ಶ್ರೀಷಾ ಸುವರ್ಣರವರ ಉತ್ತಮ ಸಾಧನೆಗೆ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿದೆ.


