ಪಣಕಜೆ, ಫೆ. 02 : ಶ್ರೀ ಕೃಷ್ಣ ಸ್ಪೋಟ್ಸ್ ಕ್ಲಬ್ ಪಣಕಜೆ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ (ದ.ಕ, ಉಡುಪಿ ಕಾಸರಗೋಡು) ಪುರುಷರ ಮತ್ತು ಮಹಿಳೆಯರ 550 ಕೆ.ಜಿ ವಿಭಾಗದ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ “ಶ್ರೀಕೃಷ್ಣಟ್ರೋಫಿ 2026” ಮಾರ್ಚ್ 01ನೇ ಆದಿತ್ಯವಾರದಂದು ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪದ ಮೈದಾನದಲ್ಲಿ ನಡೆಯಲಿದೆ. ಈ ಹಗ್ಗಜಗ್ಗಾಟ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಇಂದು ಶ್ರೀ ಕೃಷ್ಣ ಭಜನಾ ಮಂದಿರದ ದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಶ್ರೀ ಸತೀಶ್ ಆಚಾರ್ಯ, ಕಾರ್ಯದರ್ಶಿ ಶ್ರೀ ಪ್ರವೀಣ್ ಕಡ್ತ್ಯಾರ್, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾದ ಶ್ರೀ ಶ್ರೀಕಾಂತ ಶೆಟ್ಟಿ ಮುಂಡಾಡಿ, ಗೌರವ ಸಲಹೆಗಾರ ರಾದ ಶ್ರೀಮತಿ ಲೀಲಾವತಿ ವಸಂತ ಪೂಜಾರಿ ಮೂಡಳಿಕೆ, ಶ್ರೀ ಹರೀಶ್ ಪ್ರಭು ಮುಂಡಾಡಿ, ಜೊತೆ ಕಾರ್ಯದರ್ಶಿ ಶ್ರೀ ರೋಹಿತ್ ಬರ್ನ, ಸದಸ್ಯರುಗಳಾದ ಶ್ರೀ ಸುದೀಪ್ ಕುಲಾಲ್ ಭಂಡಾರದಕೊಟ್ಯ, ಶ್ರೀ ಯಶವಂತ ಪೂಜಾರಿ, ಯೋಗೀಶ್ ಕುಲಾಲ್,ಸುಧಾಕರ ಸಾಲಿಯಾನ್,ಯಾದವ್ ಕುಲಾಲ್, ಕು.ವಿದ್ಯಾಶ್ರೀ ಕುಲಾಲ್,ಕು.ಭವ್ಯ ಕುಲಾಲ್, ಉಪಸ್ಥಿತರಿದ್ದರು.

