ಕುದ್ಯಾಡಿ, ಏ. 24 : ಗ್ರಾಮದ ಬಿರ್ಮಾಜಿರಿಯ ಸ್ವೀಕೃತಿ ಕುಮಾರಿ ಇವರು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಅಂಕಗಳಲ್ಲಿ 618 ಅಂಕಗಳು ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ. ಪುತ್ತೂರು ನೆಹರು ನಗರದ ಸುದಾನ ರೆಸಿಡೆಂಟಿಯಲ್ ಸ್ಕೂಲ್ ನ ವಿದ್ಯಾರ್ಥಿನಿ ಸ್ವೀಕೃತಿ ಕುಮಾರಿ.

ಸ್ವೀಕೃತಿ ಕುಮಾರಿ ಅವರು, ಕನ್ನಡ – 100, ಇಂಗ್ಲೀಷ್ – 121, ಸಂಸ್ಕೃತ – 100, ಗಣಿತ – 98, ವಿಜ್ಞಾನ – 99, ಸಮಾಜ ವಿಜ್ಞಾನ – 100, ಒಟ್ಟು 618 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ.
ಕುದ್ಯಾಡಿ ಗ್ರಾಮದ ಬಿರ್ಮಾಜಿರಿ ಶ್ರೀಧರ ಪೂಜಾರಿ ಮತ್ತು ವಂದನ ಇವರ ಮಗಳಾದ ಸ್ವೀಕೃತಿ ಕುಮಾರಿ ಇವರು ರಾಜ್ಯಕ್ಕೆ 8ನೇ ರ್ಯಾಂಕ್ ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಮಗಳ ಸಾಧನೆ ಕಂಡು ತಂದೆ – ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲಾಡಳಿತ ಮಂಡಳಿ ಸ್ವೀಕೃತಿ ಅವರ ಸಾಧನೆಗೆ ಅಭಿನಂದಿಸಿ, ಫ್ರೋತ್ಸಾಹಿಸಿದೆ.

