ಉಜಿರೆ, ಏ. 30 : ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕಾಮಗಾರಿ ಭರದಿಂದ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನಲೆಯಲ್ಲಿ ಉಜಿರೆ ಬಳಿಯ ಟಿ.ಬಿ. ಕ್ರಾಸ್ ಬಳಿ ರಸ್ತೆ ಬದಿಯ ಮರ ತೆರವು ಕಾರ್ಯಚರಣೆ ನಡೆಯುತ್ತಿದೆ.
ಮರ ತೆರವು ಕಾರ್ಯಾಚರಣೆಯಿಂದ ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಉಜಿರೆ ಭಾಗದಲ್ಲಿ ಬೆನಕ ಆಸ್ಪತ್ರೆಯವರೆಗೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ಶ್ರೀ ಶನಿಶ್ವರ ದೇವಸ್ಥಾನಕ್ಕಿಂತಲೂ ಹಿಂದೆ ವಾಹನಗಳ ಸಾಲು ಕಂಡು ಬಂತು.
ಅಲ್ಲದೆ, ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಕೂಡ ತೆರೆಯಲಾಗಿದ್ದು, ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಕಂಬಗಳ ಕಾಮಗಾರಿಯು ಭರದಿಂದ ಸಾಗುತ್ತಿದೆ.

