ಬಂಟ್ವಾಳ, ಜು. 17 : ಪಾಪಿ ಹಂತಕ ಚೇತನ್ ದುಷ್ಕೃತ್ಯಕ್ಕೆ ಬಲಿಯಾದ ಮುಗ್ಧ ಹೆಣ್ಣು ಮಗಳು ಲಾವಣ್ಯಳಿಗೆ ಸಚಿವ ಯುಟಿ ಖಾದರ್ ಅಂತಿಮ ನಮನ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಖಾದರ್ ಅವರು, ಲಾವಣ್ಯ ಎಂಬ ಸೋದರಿಯನ್ನು ಹತ್ಯೆ ಮಾಡಿರುವುದು ತುಂಬಾ ನೋವಾಗಿದೆ. ನಾವೆಷ್ಟು ಸಂತಾಪ ಸೂಚಿಸಿದರೂ, ಪರಿಹಾರ ನೀಡಿದರೂ ಆಕೆಯ ತಂದೆ ತಾಯಿ, ಸೋದರ ಸೋದರಿಯರಿಗೆ, ಬಂಧುಮಿತ್ರರ ನೋವನ್ನು ತೊಡೆಯಲು ಸಾಧ್ಯವಿಲ್ಲ. ಇಂತಹ ದುಷ್ಕೃತ್ಯಗಳು ಇಲ್ಲಿಗೆ ಅಂತ್ಯವಾಗಬೇಕು. ಇಂತಹ ವಿಕೃತ ಮನಸುಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು, ಅದು ಮತ್ತೊಬ್ಬರಿಗೆ ಭಯವನ್ನು ಹುಟ್ಟಿಸುವಂತಿರಬೇಕು ಎಂದು ಆಗ್ರಹಿಸಿದರು.
ಆ ಕುಟುಂಬದೊಂದಿಗೆ ನಾವೆಲ್ಲಾ ಇದ್ದೇವೆ. ಆ ಹೆಣ್ಣುಮಗಳ ಆತ್ಮಕೆ ಶಾಂತಿ ಸಿಗಲಿ, ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದರು.


