ವೇಣೂರು, ಜೂ. 02 : ಸರಕಾರಿ ಪ್ರೌಢಶಾಲೆ ವೇಣೂರು ಶಾಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ತಮ್ಮ ಶಾಸಕರ ವಿವೇಚನಾ ನಿಧಿಯಿಂದ ಬೋರ್ವೆಲ್ ಸೌಲಭ್ಯವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ ತುಂಬಿದ ಜನಸ್ನೇಹಿ ಶಾಸಕ ಹರೀಶ್ ಪೂಂಜ.
ಶುದ್ಧ ನೀರಿನ ಸೌಲಭ್ಯವು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತ್ಯಗತ್ಯ ಎಂಬುದನ್ನು ಅರಿತು, ಶಾಲೆಯ ಮೂಲಭೂತ ಅಗತ್ಯಕ್ಕೆ ತಕ್ಷಣ ಸ್ಪಂದಿಸಿರುವ ಮಾನ್ಯ ಶಾಸಕರ ಈ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯ. “ಮಕ್ಕಳ ಭವಿಷ್ಯವೇ ನಾಳೆಯ ಬಲಿಷ್ಠ ಸಮಾಜ” ಎಂಬ ಧೈಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಸಕರಿಗೆ ಮೇಲುಸ್ತುವರಿ ಸಮಿತಿಯ ಉಪಾಧ್ಯಕ್ಷ ರಾಜೇಶ್ ಮೂಡುಕೋಡಿ, ಮುಖ್ಯ ಶಿಕ್ಷಕ ವೆಂಕಟೇಶ್ ತುಳಪುಳೆ, ಶಿಕ್ಷಕ ವೃಂದ, ಮಕ್ಕಳು ಕೃತಜ್ಞತೆ ಸಲ್ಲಿಸಿದರು.


