ಬೆಳ್ತಂಗಡಿ, ಏ. 18 : ಯಂಗ್ ಬಾಯ್ಸ್ ಸವಣಾಲು ಬೆಳ್ತಂಗಡಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.), ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಇದರ ಸಹಭಾಗಿತ್ವದಲ್ಲಿ, ಶ್ರೀ ಸುದೀಪ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸ ಸಹಾಯಾರ್ಥ 2ನೇ ವರ್ಷದ ಪ್ರೌಢಶಾಲೆ ವಿಭಾಗದ ಬಾಲಕರ ಆಹ್ವಾನಿತ ತಂಡಗಳ ಪಂದ್ಯ ಈಗಾಗಲೇ ಆರಂಭಗೊಂಡಿದೆ.

ಮನ್ ಶರ್ ಹೈ ಸ್ಕೂಲ್ ಹಾಗೂ ಚರ್ಚ್ ಸ್ಕೂಲ್ ಬೆಳ್ತಂಗಡಿ ಮಧ್ಯೆ ಮೊದಲ ಪಂದ್ಯಾಟ ನಡೆಯುತ್ತಿದೆ.
ಸಂಜೆ 25 ವರ್ಷ ವಯಾಮಿತಿಯ ಪುರುಷರ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಬಹಳ ಅದ್ಧೂರಿಯಿಂದ ನಡೆಯಲಿದೆ.

