ಕಾರ್ಕಳ ಜು. 21 : ತಾಲೂಕಿನ ಹಿರ್ಗಾನ ಗ್ರಾಮದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ ಅವಿನಾಶ್ ಪೂಜಾರಿ ಇವರ ಚಿಕಿತ್ಸೆಗಾಗಿ ಯೂತ್ ಬಿಲ್ಲವ (ರಿ.) ಕಾರ್ಕಳ ಸಂಘಟನೆಯ ಸದಸ್ಯರ ಸಹಕಾರದಿಂದ 24 ಸಾವಿರ ರೂ. ಹಾಗೂ ಸಂಘದ ಖಾತೆ ಯಿಂದ 6000 ಸಾವಿರ ಸೇರಿಸಿ ಒಟ್ಟು 30 ಸಾವಿರ ರೂಪಾಯಿಯ ಚೆಕ್ ನ್ನು ಹಸ್ತಾಂತರಿಸಲಾಯಿತು.
ಕಾರ್ಕಳ ಶಾಸಕರಾದ ಶ್ರೀ ವಿ.ಸುನಿಲ್ ಕುಮಾರ್ ಹಾಗೂ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್ , ಯೂತ್ ಬಿಲ್ಲವ (ರಿ.) ಕಾರ್ಕಳ ಸಂಘದ ಅಧ್ಯಕ್ಷರಾದ ಶರತ್ ಬೈಲಡ್ಕ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ , ಯುವವಾಹಿನಿ (ರಿ) ಕಾರ್ಕಳ, ಸೇವಾದಳ ಶ್ರೀ ಕ್ರೃಷ್ಣ ಕ್ಷೇತ್ರ ಆನೆಕೆರೆ, ಹರೀಶ್ ಅಮೀನ್ ಗುಂಡ್ಯಡ್ಕ ಮಿತ್ರ ಬಳಗ ಸೇರಿದಂತೆ ಒಟ್ಟು ಸುಮಾರು 95 ಸಾವಿರ ರೂಪಾಯಿ ಮೊತ್ತವನ್ನು ವಿತರಿಸಲಾಯಿತು.


